ಯಕ್ಷಗಾನ ಭಾಗವತ ಕೆ. ಪಿ. ಹೆಗಡೆಯವರಿಗೆ ಸನ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಜುಲೈ 28 , 2015
|
ಜುಲೈ 28, 2015
|
ಯಕ್ಷಗಾನ ಭಾಗವತ ಕೆ. ಪಿ. ಹೆಗಡೆಯವರಿಗೆ ಸನ್ಮಾನ
ಸಿದ್ದಾಪುರ :
ಬಡಗುತಿಟ್ಟಿನ ಶ್ರೇಷ್ಟ ಭಾಗವತ ಪ್ರಾಚಾರ್ಯ ಕೆ. ಪಿ ಹೆಗಡೆಯವರನ್ನು ಸಿದ್ದಾಪುರದಲ್ಲಿ ಕೆ ಕ್ಯೂಬ್ ಸಂಘಟನೆಯ ವತಿಯಿಂದ ಕಮಲಶಿಲೆ ಕ್ಷೇತ್ರದ ಸಹ ಮುಖ್ತೇಸರ ಅರ್ಚಕ ಶ್ರೀನಿವಾಸ ಚಾತ್ರರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯ್ತು. ಪ್ರಧಾನ ಅತಿಥಿಯಾಗಿ ಅಭಿನಂದನಾ ಭಾಷಣ ಮಾಡಿದ ಯಕ್ಷಗಾನದ ಚಿಂತಕ ಮಣಿಪಾಲ ಎಮ್. ಐ. ಟಿ ಪ್ರಾದ್ಯಾಪಕ ಪ್ರೋ. ಎಸ್. ವಿ. ಉದಯಕುಮಾರ ಶೆಟ್ಟರು ಮಾತನಾಡಿ ``ಯಕ್ಷಗಾನದಲ್ಲಿ ಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಟ್ಟ ಹೆಗಡೆಯವರು ನೂರಾರು ಪ್ರಸಿದ್ದ ಭಾಗವತರಿಗೆ ಯಕ್ಷ ಶಿಕ್ಷಣ ನೀಡಿ ಬೇರೆ ಬೇರೆ ಮೇಳಗಳಲ್ಲಿ ಉದ್ಯೋಗಮಾಡುವಲ್ಲಿ ತನ್ನ ವಿದ್ಯೆಯನ್ನು ದಾರೆ ಎರೆದಿದ್ದಾರೆ. ಬಡಗುತಿಟ್ಟಿನ ಮಾರ್ವಿ ಶೈಲಿಯ ಪ್ರಾತಿನಿಧಿಕರಾದ ಅವರ ನಿವೃತ್ತಿಯ ಸ್ಥಾನವನ್ನು ತುಂಬುವ ಭಾಗವತ ಇನ್ನೊಬ್ಬರಿಲ್ಲ `` ಎಂದು ಹೇಳಿದರು.
ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ, ಕಮಲಶಿಲೆ ಮೇಳದ ಮೆನೇಜರ್ ನಾರಾಯಣ ಶೆಟ್ಟಿ ಸನ್ಮಾನಿತರ ಕುರಿತು ಮಾತನಾಡಿದರು. ಕೆ. ಪಿ ಹೆಗಡೆ ದಂಪತಿಗಳನ್ನು ಪಲಪುಷ್ಫ ತಾಂಬೂಲ ನಗದು ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ವ್ಯವಸ್ಥಾಪಕ ಕೃಷ್ಣ ಕನ್ನಂತ ದಂಪತಿಗಳು ಕೆ ಪಿ ಹೆಗಡೆ ದಂಪತಿಗಳನ್ನು ಸೀರೆ ಕುಪ್ಪಸ ನೀಡಿ ಗೌರವಿಸಿದರು. ಯುವ ಇಂಜಿನೀಯರ್ ಸಂಪತ್ತ್ ಕನ್ನಂತ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ/ ಶ್ರುತಿ ಕನ್ನಂತ ಕಾರ್ಯಕ್ರಮ ಸಂಯ್ಯೋಜಿಸಿ. ಸುನಿಲ್ ಕನ್ನಂತ ವಂದಿಸಿದರು. ಬಳಿಕ ಖ್ಯಾತ ಕಲಾವಿದರಿಂದ ರತ್ನಾವತಿ ಕಲ್ಯಾಣ-ಅಭಿಮನ್ಯು-ಚಿತ್ರಾಕ್ಷಿ ಕಲ್ಯಾಣ ಪ್ರಸಂಗಗಳ ಪ್ರದರ್ಶನ ನೆರವೇರಿತು.
|
|
|